ನಮ್ಮ ಸಂಸ್ಥಾಪಕರು

“ಶಿಕ್ಷಣವು ಬಲಿಷ್ಠ ಮತ್ತು ಪ್ರಗತಿಪರ ರಾಷ್ಟ್ರವನ್ನು ರೂಪಿಸುವ ಕೀಲಿಯಾಗಿದೆ. ಶಾಲೆಗಳು ವಿದ್ಯಾರ್ಥಿಗಳಿಗೆ ಪ್ರಾಥಮಿಕ ಜ್ಞಾನವನ್ನು ಶಿಕ್ಷಣದ ಮೂಲಕ ನೀಡುತ್ತವೆ.  ಇಂತಹ ಶಿಕ್ಷಣವು ಮುಂಬರುವ ಪೀಳಿಗೆಗೆ ಅವರ ಭವಿಷ್ಯಕ್ಕೆ ಭದ್ರ ಅಡಿಪಾಯವನ್ನು ಹಾಕುತ್ತದೆ. ಶಿಕ್ಷಣಕ್ಕೆ  ನಮ್ಮ ಮನಸ್ಥಿತಿಯನ್ನು ರೂಪಿಸುವ ಸಾಮರ್ಥ್ಯವಿದೆ ಮತ್ತು ಉತ್ತಮವಾದದ್ದನ್ನು  ಕಂಡುಕೊಳ್ಳಲು ಸವಾಲುಗಳನ್ನು ಎದುರಿಸಿ ಅವರಿಗೆ ಬೇಕಾದ ಮಾರ್ಗದರ್ಶನ ನೀಡುವ ಶಕ್ತಿಯನ್ನು ಹೊಂದಿದೆ. ಇದರಿಂದ ಒಳ್ಳೆಯ ಪರಿಹಾರಗಳನ್ನು ಕಂಡುಕೊಳ್ಳಲು , ಸಮಾಜದ ಬೆಳವಣಿಗೆಯನ್ನು ವೇಗಗೊಳಿಸಲು ಸಾಧ್ಯವಾಗುತ್ತದೆ. ಒಟ್ಟಾರೆಯಾಗಿ,ಶಿಕ್ಷಣವು ನಮ್ಮಲ್ಲಿ ಅಡಗಿರುವ ಅಜ್ಞಾನದ ಅಂಧಕಾರದ ಮಿತಿಗಳಿಂದ ಮುಕ್ತಗೊಳಿಸುತ್ತದೆ.ರಾಷ್ಟ್ರದ ಪ್ರತಿ ಮಗುವಿಗೂ  ಆತನ ಹೃದಯದಲ್ಲಿ ಅಡಗಿರುವ ಆಲೋಚನೆಗಳಿಗೆ ಶಿಕ್ಷಣದ ಹಕ್ಕನ್ನು ನೀಡಬೇಕು ಎಂಬ ಕಲ್ಪನೆಯೊಂದಿಗೆ ಅಂಕುರ್ ಉದಯವಾಯಿತು.”

ಅಂಕುರ್ ಎಂದರೇನು?

ಶಿಬುಲಾಲ್ ಫ್ಯಾಮಿಲಿ ಫಿಲಾಂತ್ರೊಪಿಕ್ ಇನಿಶಿಯೇಟಿವ್ಸ್ (SFPI) ಜುಲೈ 2004 ರಲ್ಲಿ ಅಂಕುರ್ ಎಂಬ ಯೋಜನೆಯನ್ನು ಭಾರತದಲ್ಲಿ ವಿವಿಧ ಶೈಕ್ಷಣಿಕ ಲೋಕೋಪಯೋಗಿ ಕಾರ್ಯಕ್ರಮಗಳನ್ನು ಉತ್ತೇಜಿಸಬೇಕೆನ್ನುವ ಪ್ರಮುಖ ಉದ್ದೇಶವನ್ನಿಟ್ಟುಕೊಂಡು ಈ ಯೋಜನೆಯನ್ನು ಪ್ರಾರಂಭಿಸಲಾಯಿತು

‘ಅಂಕುರ್’ ಎಂದರೆ ಬೆಳೆಯುವ ಸಸಿ. ಉತ್ತಮ ಗುಣಮಟ್ಟದ ಶಿಕ್ಷಣವು ಎಲ್ಲಾ ಅಭಿವೃದ್ದಿಯ ಮೂಲಧಾರ ಎಂಬ ದೃಢ ವಿಶ್ವಾಸದಿಂದ ಅಂಕುರ್‌ ರೂಪುಗೊಂಡಿತು. ಅಂಕುರ್ ನ ವಿವಿಧ ಕಾರ್ಯಕ್ರಮಗಳು ಸಮಾಜದ ಅನೇಕ ವರ್ಗದ ಮಕ್ಕಳಿಗೆ ಶಿಕ್ಷಣವನ್ನು ನೀಡುವ ಗುರಿಯನ್ನು ಹೊಂದಿದೆ. ಈ ಮೂಲಕ ಅಂಕುರ್‌ಗೆ ದಾಖಲಾದ ನಂತರ ಮಗುವಿನ ಶಾಲಾ ಪ್ರಕ್ರಿಯೆಯ ಪ್ರಯಾಣದಲ್ಲಿ ಸ್ಥಿರ ಹಾಗು ಗುಣಮಟ್ಟದ ಶಿಕ್ಷಣವನ್ನು ಖಾತ್ರಿಪಡಿಸುತ್ತದೆ.

ಪ್ರತಿ ಮಗುವಿಗೂ ಶಿಕ್ಷಣದ ಹಕ್ಕು ಇದೆ ಎಂದು ನಾವು ಬಲವಾಗಿ ನಂಬುತ್ತೇವೆ. ಶಿಕ್ಷಣವು ನಮ್ಮ ಮನಸ್ಸನ್ನು ಶ್ರೀಮಂತಗೊಳಿಸುತ್ತದೆ, ಚಾರಿತ್ರ್ಯವನ್ನು ನಿರ್ಮಿಸುತ್ತದೆ ಹಾಗೂ ನಮ್ಮ ಜ್ಞಾನದ ಪರಿದಿಯನ್ನು ವಿಸ್ತರಿಸುತ್ತದೆ. ಜೀವನದ ವಿವಿಧ ಹಂತಗಳಲ್ಲಿರುವ ಮಕ್ಕಳಿಗೆ ಶಿಕ್ಷಣವು ದೊರಕುವ ಹಾಗೆ ಮಾಡುವುದು ಈ ಪ್ರತಿಷ್ಠಾನದ ಧ್ಯೇಯವಾಗಿದೆ

ನಮ್ಮ ಗುರಿ

ಸಮಾಜದ ಹಿಂದುಳಿದ ವರ್ಗಗಳ ಮಕ್ಕಳಿಗೆ ಶೈಕ್ಷಣಿಕ ವ್ಯವಸ್ಥೆಯಲ್ಲಿನ ನ್ಯೂನತೆಗಳನ್ನು ಎದುರಿಸಲು ಸಹಾಯಮಾಡುವುದು, ಮತ್ತು ಆರಾಮದಾಯಕ, ನಿರ್ಮಲವಾದ ವಸತಿ, ಪೋಷಣೆ ಹಾಗೂ ಉತ್ತಮ ನಡತೆಯನ್ನು ನಿರ್ಮಿಸುವಂತಹ ಪರಿಸರ ಹಾಗೂ ಮಕ್ಕಳ ವೈಯಕ್ತಿಕ ಆಸಕ್ತಿಗಳ ಮತ್ತು ಸಾಮರ್ಥ್ಯದ ಆಧಾರದ ಮೇಲೆ ಉತ್ತಮವಾದ ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆ ಮತ್ತು ನಂತರದ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು

ನಮ್ಮ ದೃಷ್ಟಿ ಕೋನ

ಆರ್ಥಿಕವಾಗಿ ಹಿಂದುಳಿದ ಹಾಗೂ ಸವಲತ್ತು ವಂಚಿತ ಮಕ್ಕಳ ಜೀವನವನ್ನು ಆರೋಗ್ಯ, ಸಂತೋಷ, ಭರವಸೆ ಹಾಗೂ ಸಾಧನೆಗಳಿಂದ ತುಂಬಿದ ಜೀವನವನ್ನಾಗಿ ಪರಿವರ್ತಿಸುವುದು.

ನಮ್ಮ ಮೌಲ್ಯಗಳ ವ್ಯವಸ್ಥೆ: R-CARE

ನಮ್ಮ ಸ್ಪಷ್ಟ ಗುರಿಯ ಕಡೆಗೆ ಸಾಗುವ  ಪ್ರಯಾಣದಲ್ಲಿ ನಾವು ಮಾಡುವ ಆಯ್ಕೆಗಳಿಗೆ ಮಾರ್ಗದರ್ಶನ ನೀಡುವುದೇ ನಮ್ಮ ಪ್ರಮುಖ ಮೌಲ್ಯಗಳು ; ನಮ್ಮ ಆರೈಕೆ, ನಮ್ಮ ಕಾಳಜಿ. (R CARE- Our Care! ಎಂದು ಸಂಕ್ಷಿಪ್ತ ರೂಪದಲ್ಲಿ ಬರೆಯಲಾಗಿದೆ ). ನಮ್ಮ ಮೌಲ್ಯಗಳು ನಮ್ಮ ಎಲ್ಲಾ ವಿದ್ಯಾರ್ಥಿಗಳನ್ನು,  ನಿರ್ವಾಹಕರನ್ನು ಮತ್ತು ಎಲ್ಲಾ ಸಿಬ್ಬಂದಿವರ್ಗದವರನ್ನು  ಒಗ್ಗೂಡಿಸುವ ಸಾಧನವಾಗಿದೆ .

ಗೌರವ

ನಮ್ಮಿಂದ ಭಿನ್ನವಾಗಿರುವ ಇತರರನ್ನು ನಾವು ಸ್ವೀಕರಿಸುತ್ತೇವೆ

ಗೌರವ

ಎಲ್ಲಾ ವರ್ಗದ ಜನರನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡಾಗ ಈ ಮೌಲ್ಯವು ಪ್ರದರ್ಶಿತವಾಗುತ್ತದೆ. ಇದು ಎಲ್ಲರನ್ನು ಅರ್ಥ ಮಾಡಿಕೊಳ್ಳುವ, ಸಹಿಷ್ಣುತೆ, ಸಮಾನತೆಯನ್ನು ಎತ್ತಿ ಹಿಡಿಯುತ್ತದೆ. ಇತರರ ದೃಷ್ಟಿಕೋನಗಳನ್ನು ಸ್ವೀಕರಿಸಿ ನಮ್ಮ ಗುರಿಯತ್ತ ಒಂದು ತಂಡವಾಗಿ ಕೆಲಸ ಮಾಡುತ್ತೇವೆ

ಸೃಜನಶೀಲತೆ

ನಾವು ಸದಾ ಕುತೂಹಲದಿಂದ ಇರುತ್ತೇವೆ ಮತ್ತು ವಿಷಯಗಳು ಯಾವ ರೀತಿ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಇಷ್ಟ ಪಡುತ್ತೇವೆ

ಸೃಜನಶೀಲತೆ

ನಾವು ನವೀನ ಮತ್ತು ಸ್ವತಂತ್ರವಾಗಿ ಯೋಚಿಸಿ ಈ ಮೌಲ್ಯವನ್ನು ಪ್ರದರ್ಶಿಸುತ್ತೇವೆ. ಇದು ಅಭಿವ್ಯಕ್ತಿ , ಸ್ವಂತಿಕೆ, ಮುಕ್ತತೆ, ವಿಚಾರಣೆ, ಮತ್ತು ಸ್ವಾತಂತ್ರ್ಯದ ಸಂಸ್ಕೃತಿಯನ್ನು ಬೆಳೆಸುತ್ತದೆ. ನಾವು ಎಲ್ಲದರಲ್ಲೂ ಕುತೂಹಲ ಮತ್ತು ಖುಷಿಯನ್ನು ತರುತ್ತೇವೆ

ಸಾಧನೆ

ನಾವು ನಮ್ಮ ಮತ್ತು ಇತರರ ಯಶಸ್ಸನ್ನು ಸಂಭ್ರಮಿಸುತ್ತೇವೆ

ಸಾಧನೆ

ಯಾವುದನ್ನಾದರೂ ಸಾಧಿಸಲು ಮತ್ತು ಯಶಸ್ವಿಯಾಗಲು ವೈಯಕ್ತಿಕ ಮತ್ತು ಸಾಂಸ್ಥಿಕ ಉನ್ನತಿಯನ್ನು ಈಡೇರಿಸಲು ಈ ಮೌಲ್ಯವನ್ನು ಪ್ರದರ್ಶಿಸುತ್ತೇವೆ.ಇದು ನಮ್ಮ ಗುರಿ ಮತ್ತು ಮಾನದಂಡಗಳನ್ನು ಎತ್ತಿಹಿಡಿಯಲು ಸಹಕಾರಿಯಾಗಿದೆ.

ಜವಾಬ್ದಾರಿ

ಜವಾಬ್ದಾರಿ: ನಾವು ನಿಯಮಗಳನ್ನು ಪಾಲಿಸುತ್ತೇವೆ

ಜವಾಬ್ದಾರಿ

ನಮ್ಮ ಸಂಸ್ಥೆಯು ಕೆಲಸದ ಪ್ರಾಮಾಣಿಕತೆ ಮೌಲ್ಯವನ್ನು ಪ್ರದರ್ಶಿಸುತ್ತದೆ. ಶ್ರದ್ಧೆ , ಕಠಿಣ ಪರಿಶ್ರಮ, ನಾಯಕತ್ವದ ಮತ್ತು ಅತ್ಯುತ್ತಮ ಪ್ರಯತ್ನದ ಮೂಲಕ ಏನು ಮಾಡಬೇಕೋ ಅದನ್ನು ಮಾಡುವ ಇಚ್ಛೆ ಇದ್ದು ಮತ್ತು ಅದಕ್ಕೆ ನಾವು ಉತ್ತರದಾಯಿಗಳಾಗಿ ಕೆಲಸವನ್ನು ಮಾಡುವ ಜವಾಬ್ದಾರಿಯನ್ನು ಹೊಂದಿದ್ದೇವೆ.

ಆರೈಕೆ

ನಾವು ದಯೆ ಮತ್ತು ಸಹಾಯಹಸ್ತವುಳ್ಳವರು

ಆರೈಕೆ

ನಮ್ಮ ಸಂಸ್ಥೆಯ ಪ್ರಮುಖ ಮೌಲ್ಯವೆಂದರೆ ಮಕ್ಕಳಿಗೆ ಸಹಾಯವನ್ನು ಮಾಡುವಾಗ ಪ್ರತಿಯೊಬ್ಬರ ಸುರಕ್ಷತೆ, ಭದ್ರತೆ , ದೈಹಿಕ ಮತ್ತು ಭಾವನಾತ್ಮಕ ಯೋಗ ಕ್ಷೇಮವನ್ನು ಎತ್ತಿ ಹಿಡಿಯುವುದರ ಜೊತೆಗೆ ಪರಿಸರ ಮತ್ತು ಸಮಾಜದ ಬಗ್ಗೆ ಸಂವೇದನಶೀಲತೆ ಮತ್ತು ಕಾಳಜಿಯನ್ನು ಪರಿಗಣಿಸಲಾಗುತ್ತದೆ

ಶ್ರೇಷ್ಠತೆ

ಶ್ರೇಷ್ಠತೆ: ಸರಿಯಾದದ್ದನ್ನು ಮಾಡುವುದು ನಮ್ಮ ಆಯ್ಕೆಯಾಗಿದೆ

ಶ್ರೇಷ್ಠತೆ

ನಿರಂತರ ಸುಧಾರಣೆಗಾಗಿ ಎಲ್ಲ ಹಂತದಲ್ಲಿಯೂ ಬೆಳವಣಿಗೆಗೆ ಶ್ರಮಿಸಿದಾಗ ಈ ಮೌಲ್ಯವನ್ನು ಪ್ರದರ್ಶಿಸಲಾಗುತ್ತದೆ. ಇದು ಜೀವನದಲ್ಲಿ ನಿರಂತರ ಕಲಿಕೆಯನ್ನು, ಗುಣಮಟ್ಟವನ್ನು , ಪ್ರಯತ್ನದಲ್ಲಿ ಛಲವನ್ನು ಎತ್ತಿ ಹಿಡಿಯುತ್ತದೆ. ಸಾಮರ್ಥ್ಯವನ್ನು ಪೂರೈಸಲು ಮತ್ತು ಮೀರಲು ಬಲವಾದ ಪ್ರೇರಣೆ ನನ್ನಲ್ಲಿದೆ.

ನಮ್ಮ ನಾಲ್ಕು ಸ್ತಂಭಗಳು

ಅಂಕುರ್ ನ ಎಲ್ಲಾ ಕಾರ್ಯಕ್ರಮಗಳು ಮತ್ತು ಎಲ್ಲಾ ಪ್ರಯತ್ನಗಳು ನಾಲ್ಕು ಕಂಬಗಳ ನಿಲುವುಗಳ ಸುತ್ತ ಆವೃತ್ತಿಯಾಗಿರುತ್ತದೆ

ಸುರಕ್ಷತೆ ಮತ್ತು ಭದ್ರತೆ

ಮಕ್ಕಳಿಗೆ ಎಲ್ಲಾ ಸಮಯದಲ್ಲೂ ಸುರಕ್ಷತೆಯ ಭಾವನೆಯನ್ನು ಮತ್ತು ಪೂರಕ ವಾತಾವರಣವನ್ನು ಸೃಷ್ಟಿಸುವುದು ನಮ್ಮ ಪ್ರಧಾನ ಜವಾಬ್ದಾರಿಯಾಗಿದೆ.

ಭಾವನಾತ್ಮಕ ಯೋಗಕ್ಷೇಮ

ಭಾವನಾತ್ಮಕ ಯೋಗಕ್ಷೇಮವು ದೈಹಿಕ ಮತ್ತು ಅರಿವಿನ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ. ಮಕ್ಕಳ ಭಾವನಾತ್ಮಕ ಕ್ಷೇಮ ಮತ್ತು ಸಂತೋಷವನ್ನು ಖಾತ್ರಿಪಡಿಸುವುದೇ ನಮ್ಮ ಕೇಂದ್ರೀಕೃತ ವಿಧಾನವಾಗಿದೆ.

ಶೈಕ್ಷಣಿಕ ಬೆಂಬಲ

ಇಂದಿನ ಮಕ್ಕಳ ಸಂಸ್ಕಾರವು ನಮ್ಮ ರಾಷ್ಟ್ರದ ಮುಂದಿನ ಸಹಾಯದಾಯಕ ಪ್ರಜೆಗಳಿಗೆ ಕಾರಣವಾಗುತ್ತದೆ. ಹೀಗಾಗಿ, ಮಕ್ಕಳಲ್ಲಿ ಶೈಕ್ಷಣಿಕ ಮತ್ತು ಬೌದ್ಧಿಕ ಸಾಮರ್ಥ್ಯಗಳನ್ನು ನಿರ್ಮಿಸಲು ನಾವು ಭದ್ರವಾದ ಅಡಿಪಾಯವನ್ನು ಹಾಕುತ್ತೇವೆ. ಶಿಕ್ಷಣವನ್ನು ಮಕ್ಕಳಿಗೆ ಸಾಧಿಸಲು ಮತ್ತು ಉತ್ಕೃಷ್ಟಗೊಳಿಸಲು ಅನುವು ಮಾಡಿಕೊಡುವುದಲ್ಲದೆ ನಾಳೆಯ ನೈಜ ಜಗತ್ತನ್ನು ಪ್ರಾರಂಭಿಸಲು ಅವರನ್ನು ಸಿದ್ಧಪಡಿಸುತ್ತೇವೆ.

ವ್ಯಕ್ತಿತ್ವ ವಿಕಸನ

ಸಮೃದ್ಧ ಮತ್ತು ಸಕ್ರಿಯವಾದ ಪರಿಸರವನ್ನು ಒದಗಿಸಲು ನಾವು ಮಕ್ಕಳೊಂದಿಗೆ ನಮ್ಮ ಸಂವಹನ ಕೌಶಲ್ಯವನ್ನು ವಿನ್ಯಾಸಗೊಳಿಸುತ್ತೇವೆ. ಹಾಗು ಸಾಮಾಜಿಕ, ವಿಮರ್ಶಾತ್ಮಕ ಚಿಂತನೆಯ ಮೂಲಕ, ತಂಡದಲ್ಲಿ ಸಹಕಾರ ಮನೋಭಾವ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳನ್ನು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ದಯೆ, ಸಹಾನುಭೂತಿ ಮತ್ತು ವಿನಮ್ರತೆಯನ್ನು ಹೊಂದಿರುವ ಜವಾಬ್ದಾರಿಯುತ ಗುಣಲಕ್ಷಣಗಳನ್ನು ಅಳವಡಿಸಿಕೊಳ್ಳಲು ಮಕ್ಕಳನ್ನು ಉತ್ತಮ ಮನುಷ್ಯರನ್ನಾಗಿ ರೂಪಿಸುವುದು ನಮ್ಮ ಉದ್ದೇಶವಾಗಿದೆ.

ನಮ್ಮ ವಿಧಾನ

ನಿಯಮಿತ ಸಭೆಗಳೊಂದಿಗೆ ವೃತ್ತಿಪರವಾಗಿ ನಡೆಸಲ್ಪಡುವ ಮತ್ತು ಪ್ರಕ್ರಿಯೆ ಚಾಲಿತವಾದ ಅಂಕುರ್ ಒಂದು ಭಿನ್ನವಾದ ಸಂಸ್ಥೆಯಾಗಿದೆ . ಎಲ್ಲಾ ಪ್ರಕ್ರಿಯೆಗಳನ್ನು ವಿವರವಾಗಿ ಮತ್ತು ಉತ್ತಮವಾಗಿ ದಾಖಲಿಸಲ್ಪಟ್ಟಿದೆ. ಎಲ್ಲಾ ವಿತ್ತೀಯ ವಹಿವಾಟುಗಳು ಪಾರದರ್ಶಕವಾಗಿರುತ್ತವೆ ಮತ್ತು ನಿಯತಕಾಲಿಕವಾಗಿ ಮೌಲ್ಯಮಾಪನ ಮಾಡಲಾಗುತ್ತದೆ. ಪ್ರತಿ ಮಗುವಿನ ಶೈಕ್ಷಣಿಕ, ವೈದ್ಯಕೀಯ ಮತ್ತು ಪಠ್ಯೇತರ ದಾಖಲೆಗಳಿಗಾಗಿ, ನಡವಳಿಕೆಯ ಮಾದರಿಗಳು ಮತ್ತು ವರದಿಗಳ ವಿಚಾರಗಳು ವಿವರವಾದ ಕಡತಗಳಲ್ಲಿ ನಿರ್ವಹಿಸಲಾಗುತ್ತದೆ.

ನಮ್ಮ ಸಂಸ್ಕೃತಿ

ಮಕ್ಕಳಲ್ಲಿ ಸಾಂಸ್ಕೃತಿಕ ಪರಂಪರೆಯನ್ನು ಬೆಳೆಸಲು ಮತ್ತು ಉಳಿಸಿಕೊಳ್ಳಲು ಪ್ರಯತ್ನಗಳನ್ನು ಮಾಡಲಾಗುತ್ತದೆ. ವಸತಿಗೃಹದಲ್ಲಿ ಎಲ್ಲ ಹಬ್ಬಗಳನ್ನು ಆಚರಿಸಲಾಗುತ್ತದೆ. ಎಲ್ಲಾ ಧರ್ಮಗಳಿಗೆ ಸಮಾನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ ಮತ್ತು ಮಕ್ಕಳು ತಮ್ಮ ಹೆತ್ತವರ ಧರ್ಮವನ್ನು ಅನುಸರಿಸಲು ಮುಕ್ತರಾಗಿದ್ದಾರೆ. ನೈತಿಕತೆ ಮತ್ತು ಮೌಲ್ಯಗಳನ್ನು ಕಥೆಗಳ ಮೂಲಕ ಕಲಿಸಲಾಗುತ್ತದೆ. ಸ್ವಸ್ಥ ವಾತಾವರಣದಲ್ಲಿ ಈ ಮೌಲ್ಯಗಳನ್ನು ಬಲಪಡಿಸಲು ಮನರಂಜನಾ ಕೇಂದ್ರದಲ್ಲಿ ಸಾಪ್ತಾಹಿಕ ಕಾರ್ಯಕ್ರಮಗಳಲ್ಲಿ ಮಕ್ಕಳಿಂದ ನಾಟಕಗಳನ್ನು ರೂಪಿಸಲಾಗುತ್ತದೆ.

ಇಲ್ಲಿಯವರೆಗಿನ ಅಂಕುರ್ ನ ಪ್ರಯಾಣ

ಇಲ್ಲಿಯವರೆಗಿನ ಅಂಕುರ್ ಪ್ರಯಾಣ

ಗುಣಮಟ್ಟದ ಶಿಕ್ಷಣವು ಸಮಾಜದ ಎಲ್ಲಾ ಅಭಿವೃದ್ಧಿಯ ಪ್ರಗತಿಯ ಮೂಲಾಧಾರವಾಗಿದೆ ಎಂಬ ನಂಬಿಕೆಯಿಂದ ಹುಟ್ಟಿದ , ಸಂಸ್ಥೆಯು  ಜುಲೈ 2004 ರಲ್ಲಿ ನೋಂದಾವಣೆಗೊಂಡಿತು. ಸಂಸ್ಥೆಯು ಭಾರತದ, ಕರ್ನಾಟಕ ರಾಜ್ಯದ ಬೆಂಗಳೂರಿನಲ್ಲಿದೆ. ಸಂಸ್ಥೆಯ ಉದ್ದೇಶ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಪರೋಪಕಾರಿ ಪ್ರಯತ್ನಗಳನ್ನು ಉತ್ತೇಜಿಸುವುದಾಗಿದೆ.

ಇದು ಹಿಂದುಳಿದ ವರ್ಗದ ಮಕ್ಕಳಿಗಾಗಿ ಸಮಗ್ರ ವಸತಿ ಶಿಕ್ಷಣ ಮತ್ತು ವಿದ್ಯಾರ್ಥಿವೇತನ ನೀಡುವ ಯೋಜನೆಯಾಗಿದೆ. ಅಂಕುರ್ ಯೋಜನೆಯನ್ನು ಸಂಹಿತಾ ಅಕಾಡೆಮಿ ಶಾಲೆಯೊಂದಿಗೆ, ಆರ್ಥಿಕವಾಗಿ ಸವಲತ್ತು ಹೊಂದಿರುವ ಹಿನ್ನೆಲೆಯಿಂದ ಬಂದ ಮಕ್ಕಳ ಸಮನ್ವಯದ ಮೂಲಕ ಅಂತರ್ಗತ ವಾತಾವರಣದಲ್ಲಿ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಅಂಕುರ್ ಕೆಳಗಿನ ಯೋಜನೆಗಳನ್ನು ಒಳಗೊಂಡಿದೆ:

  • ಸಂಹಿತಾ ಅಕಾಡೆಮಿ ಶಾಲೆಯ ಭಾಗವಾಗಿ ಕಾರ್ಯನಿರ್ವಹಿಸುತ್ತಿರುವ ವಸತಿ ಗೃಹ.
  • ಇತರ ಶಾಲೆಗಳಲ್ಲಿ ಮತ್ತು ಪಿಯುಸಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಬೆಂಬಲವನ್ನು ವಿಸ್ತರಿಸಲಾಗಿದೆ
  • ಕಾಲೇಜಿಗೆ ತೆರಳಿದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮತ್ತು ಇತರ ಸೌಲಭ್ಯಗಳ ಬೆಂಬಲವನ್ನು ನೀಡಲಾಗುತ್ತದೆ

ಅಂಕುರ್ ಹಳೆಯ ವಿದ್ಯಾರ್ಥಿಗಳ ಮಾತುಗಳಲ್ಲಿ

ಪ್ರದೀಪ್ ಬಸವರಾಜ
ಪ್ರದೀಪ್ ಬಸವರಾಜವಂಚನೆ ಮತ್ತು ಅನುಸರಣೆ ಅಧಿಕಾರಿ, ಹೆಚ್ ಎಸ್ ಬಿ ಸಿ ಬ್ಯಾಂಕ್ (ಯು. ಕೆ.), ಬೆಂಗಳೂರು
Read More
"ಅಂಕುರ್ ನಲ್ಲಿ ಹದಿನಾಲ್ಕು ವರ್ಷಗಳ ಕಾಲ ಓದಿದ್ದು, ಅದು ನನ್ನ ಜೀವನದ ಅತ್ಯುತ್ತಮ ಮತ್ತು ಮರೆಯಲಾಗದ ಭಾಗವಾಗಿದೆ. ಗೆಳೆಯರು, ಸಿಬ್ಬಂದಿ ಮತ್ತು ಶಿಕ್ಷಕ ರೆಲ್ಲರೂ ನನ್ನನ್ನು ಮೆಚ್ಚುಗೆ ಮತ್ತು ಪರಿಗಣನೆಯುಳ್ಳ ವ್ಯಕ್ತಿಯಾಗಿ ರೂಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ನನಗೆ ಸಮಂಜಸವಾದ ಮೇಲ್ವಿಚಾರಣೆ ಮತ್ತು ಮಾರ್ಗದರ್ಶನ, ವ್ಯಕ್ತಿತ್ವ ಮತ್ತು ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯಗಳನ್ನು ಬೆಳೆಸಲು ಮತ್ತು ಸುಧಾರಿಸುವಂತಹ ಪ್ರಮುಖ ಪಾತ್ರವಹಿಸಿದೆ. ಇದು ನಿಜವಾಗಿಯೂ ನನ್ನ ಎರಡನೇ ಮನೆಯಾಗಿದೆ. ಅಂಕುರ್ ಒದಗಿಸಿದ ಅದ್ಭುತ ಅನುಭವಗಳು, ನಗು ಮತ್ತು ಕಾಳಜಿ ಇತ್ಯಾದಿಗಳಿಗಾಗಿ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಪದಗಳಲ್ಲಿ ಸಾಧ್ಯವಿಲ್ಲ.
ಇಂದುಮತಿ
ಇಂದುಮತಿ ಬೆಂಗಳೂರಿನಲ್ಲಿ ಎಂ.ಬಿ.ಎ. ವ್ಯಾಸಂಗ ಮಾಡುತ್ತಿದ್ದಾರೆ
Read More
ನಾನು ಹನ್ನೊಂದು ವರ್ಷದವಳಿದ್ದಾಗ ಅಂಕುರ್‌ಗೆ ಕಾಲಿಟ್ಟಿದ್ದು, ಅಂಕುರ್ ನ ನಿರಂತರ ಸಹಾಯ ಮತ್ತು ಸ್ಪೂರ್ತಿಯು ನನಗೆ ನನ್ನ ಕನಸನ್ನು ಸಾಕಾರಗೊಳಿಸಿತು. " ಕನಸುಗಳನ್ನು ಅನುಸರಿಸುವ ಧೈರ್ಯವಿದ್ದರೆ ನಮ್ಮ ಕನಸುಗಳು ನನಸಾಗುತ್ತವೆ". ಅಂಕುರ್ ನ ಅಚಲವಾದ ಮಾರ್ಗದರ್ಶನ ಮತ್ತು ಬೆಂಬಲವು ನನ್ನನ್ನು ವೃತ್ತಿಪರ ವ್ಯಕ್ತಿಯನ್ನಾಗಿ ನಿರ್ಮಿಸಿದೆ. ನನಗೆ ಈ ಅವಕಾಶವನ್ನು ನೀಡಿದ್ದಕ್ಕಾಗಿ ಮತ್ತು ಈ ಕುಟುಂಬದ ಭಾಗವಾಗಲು ನೆರವಾಗಿದ್ದಕ್ಕಾಗಿ ನಾನು ಹೆಚ್ಚು ಋಣಿಯಾಗಿದ್ದೇನೆ.
ವರುಣ್ ಕುಮಾರ್
ವರುಣ್ ಕುಮಾರ್ಸೇಲ್ಸ್ ಎಕ್ಸಿಕ್ಯೂಟಿವ್, ಗೋದ್ರೇಜ್ ಪ್ರಾಪರ್ಟೀಸ್, ಮುಂಬೈ
Read More
"ಅಂಕುರ್‌ನಲ್ಲಿನ ನನ್ನ ಪ್ರಯಾಣವು ನನಗೆ ಪರಿವರ್ತಿತವಾಗಿತ್ತು. ಸಹಾನುಭೂತಿಯುಳ್ಳ ಎಸ್.ಡಿ. ಶಿಬುಲಾಲ್ ಚಿಕ್ಕಪ್ಪ ಮತ್ತು ಕುಮಾರಿ ಮಮ್ಮಿ ಅವರು ನೀಡಿದ ಅಮೂಲ್ಯವಾದ ಬೆಂಬಲ ಮತ್ತು ಮಾರ್ಗದರ್ಶನಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ. ಅಂಬೆಗಾಲಿಡುವ ಮಗುವಿನಿಂದ ನಡೆಯಲು ಕಲಿಸುವ ಮೂಲಕ ಅಂಕುರ್ ನನ್ನನ್ನು ಶಿಸ್ತುಬದ್ಧ ಮತ್ತು ಮಹತ್ವಾಕಾಂಕ್ಷೆಯ ವಯಸ್ಕನಾಗಿ ಬೆಳೆಯಲು ಸಹಾಯ ಮಾಡಿದೆ. ಸಿಬ್ಬಂದಿ ಮತ್ತು ಶಿಕ್ಷಕರು ನನ್ನ ಶಿಕ್ಷಣವನ್ನು ಪೋಷಿಸಿದರು ಮತ್ತು ಮಹತ್ವಾಕಾಂಕ್ಷೆ ಮತ್ತು ಕೌಶಲ್ಯದ ಪ್ರಜ್ಞೆಯನ್ನು ಹುಟ್ಟುಹಾಕಿದರು. ಅಂಕುರ್ ನನ್ನ ಪ್ರೀತಿಯ ಮನೆಯಾಯಿತು, ಪರಿವರ್ತನೆಯ ಶೈಕ್ಷಣಿಕ ಸಾಧ್ಯತೆಗಳನ್ನು ನೀಡಿತು ಮತ್ತು ನನ್ನ ಸ್ವಂತ ಭವಿಷ್ಯವನ್ನು ನಾನು ರೂಪಿಸಿಕೊಳ್ಳಬಹುದು ಎಂದು ನನಗೆ ಕಲಿಸಿತು. ಇಲ್ಲಿ ನನ್ನ 15 ವರ್ಷಗಳಲ್ಲಿ, ನಾನು ಅಗತ್ಯವಾದ ಜೀವನ ಕೌಶಲ್ಯಗಳನ್ನು ಗಳಿಸಿದೆ, ಜೀವಮಾನದ ಸ್ನೇಹವನ್ನು ರೂಪಿಸಿದೆ ಮತ್ತು ಪರಾನುಭೂತಿ, ದಯೆ ಮತ್ತು ಕೃತಜ್ಞತೆಯ ಮೌಲ್ಯಗಳನ್ನು ಕಲಿತಿದ್ದೇನೆ. ನಾನು ಅದನ್ನು ಮುಂದಕ್ಕೆ ಹಿoಪಾವತಿಸಲು ಮತ್ತು ಜಗತ್ತಿನಲ್ಲಿ ಸಕಾರಾತ್ಮಕವಾಗಿ ಪರಿಣಾಮ ಬೀರಲು ಬದ್ಧನಾಗಿದ್ದೇನೆ. ಎಲ್ಲದಕ್ಕೂ ನನ್ನ ಹೃದಯಾಂತರಾಳದ ಧನ್ಯವಾದಗಳು. ಜೀವನವನ್ನು ಎದುರಿಸಲು ಅಂಕುರ್ ನನ್ನನ್ನು ಮಿತಿಯಿಲ್ಲದಷ್ಟು ಸಿದ್ಧಪಡಿಸಿದೆ.
Previous
Next